RCB: ಆರ್‌ಸಿಬಿ ತಂಡ ಸೋಲೋದಕ್ಕೆ ಹರ್ಷಲ್ ಪಟೇಲ್ ಕಾರಣ ಅಲ್ವಂತೆ! ಈತ ಕ್ರಿಕೆಟಿಗ ಅಲ್ದಿದ್ರೂ ಇವನೇ ಸೋಲೋಕೆ ನಿಜವಾದ ಕಾರಣ ಎಂದ ಅಭಿಮಾನಿಗಳು.

RCB ನಿನ್ನೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಮೊದಲಿಗೆ ಬ್ಯಾಟಿಂಗ್ ಮಾಡಿ ಭರ್ಜರಿ 212 ರನ್ನುಗಳನ್ನು ಬಾರಿಸಿತ್ತು. ಇಷ್ಟೊಂದು ದೊಡ್ಡ ಮೊತ್ತವನ್ನು ಸೇರಿಸಿದ ನಂತರ ಖಂಡಿತವಾಗಿ ಆರ್ಸಿಬಿ(RCB) ತಂಡ ಗೆದ್ದೇ ಗೆಲ್ಲುತ್ತದೆ ಎಂಬುದಾಗಿ ಅವರ ಅಭಿಮಾನಿಗಳು ಭಾವಿಸಿದ್ದರು.

ಇದಕ್ಕೆ ಪೂರಕ ಎನ್ನುವಂತೆ ಲಖ್ನೋ(LSG) ತಂಡದ ಮೊದಲ ಮೂರು ವಿಕೆಟ್ಗಳು ಅತ್ಯಂತ ಸುಲಭವಾಗಿ ಆರ್ಸಿಬಿ ಬೌಲರ್ಗಳ ತೆಕ್ಕೆಗೆ ಸೇರುತ್ತವೆ. ಆದರೆ ನಂತರ ಬಂದಂತಹ ನಿಕೋಲಸ್ ಪೂರನ್(Nicholas Pooran) ಹಾಗೂ ಮಾರ್ಕಸ್ ಸ್ಟೋಯ್ನೀಸ್ ಮತ್ತು ಆಯುಷ್ ಬಡೋನಿ ಆರ್ ಸಿ ಬಿ ಬೌಲರ್ಗಳ ನಿದ್ರೆಯನ್ನು ಕದಿಯುತ್ತಾರೆ.

ಅದರಲ್ಲೂ ವಿಶೇಷವಾಗಿ ೊನೆಯ ಓವರ್ ನಲ್ಲಿ ಗೆಲ್ಲುವಂತಹ ಅವಕಾಶ ಇದ್ದರೂ ಕೂಡ ಬೌಲರ್ ಆಗಿರುವಂತಹ ಹರ್ಶಲ್ ಪಟೇಲ್(Harshal Patel) ಗೆಲ್ಲುವ ಅವಕಾಶವನ್ನು ಕೈ ಚೆಲ್ಲುತ್ತಾರೆ ಎಂಬುದಾಗಿ ಪ್ರತಿಯೊಬ್ಬ ಆರ್‌ಸಿಬಿ ಅಭಿಮಾನಿಗಳು ಕೂಡ ಶಪಿಸುತ್ತಿದ್ದಾರೆ. ಆದರೆ ಸೋಲಲು ಬೇರೊಬ್ಬರು ಕಾರಣ ಎಂಬುದಾಗಿ ಕೆಲವು ನೆಟ್ಟಿಗರು ಈಗ ಕಾಮೆಂಟ್ ಮಾಡುತ್ತಿದ್ದಾರೆ.

ಹೌದು ಮಿತ್ರರೇ ಬಿಗ್ ಬಾಸ್ ಖ್ಯಾತಿಯ ಸಂಖ್ಯಾಶಾಸ್ತ್ರದ ಗುರೂಜಿ ಆಗಿರುವಂತಹ ಆರ್ಯವರ್ಧನ್ ಗುರೂಜಿ(Aryavardhan Guruji) ಅವರು ಕೂಡ ನಿನ್ನೆ ಮ್ಯಾಚ್ ನೋಡಲು ಕ್ರೀಡಾಂಗಣಕ್ಕೆ ಆಗಮಿಸಿದ್ದು ಅವರೇ ಆರ್ಸಿಬಿ ತಂಡ ಸೋಲಲು ಕಾರಣ ಎಂಬುದಾಗಿ ಎಲ್ಲರೂ ಈಗ ಮಾತನಾಡುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!