Ambareesh Smaraka: ಅಂಬರೀಶ್ ಸ್ಮಾರಕ ವೇಸ್ಟ್ ಎಂದು ಚೇತನ್ ಅಹಿಂಸ ಸುಮಲತಾ ಅವರ ವಿರುದ್ಧ ನೀಡಿದ ಹೇಳಿಕೆ ಏನು ಗೊತ್ತಾ?

Chethan Ahimsa ಆಗಾಗ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಪ್ರಚಾರದಲ್ಲಿರುವ ಪ್ರಯತ್ನವನ್ನು ಮಾಡುವ ಚೇತನ ಅಹಿಂಸ ಈಗ ಮತ್ತೊಂದು ಹೇಳಿಕೆಯನ್ನು ನೀಡುವ ಮೂಲಕ ಮಂಡ್ಯದ ಗಂಡು ಕಲಿಯುಗದ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚೇತನ್ ಅಹಿಂಸ ಅವರ ಪ್ರಕಾರ ಅಂಬರೀಷ್ ಅವರ ಸ್ಮಾರಕ ಮಾಡಿರುವುದೇ ತಪ್ಪಂತೆ. ಬನ್ನಿ ಈ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಚೇತನ್ ಅಹಿಂಸ(Chethan Ahimsa) ಅವರ ಪ್ರಕಾರ ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಾಯಕ ನಟರಲ್ಲಿ ಒಬ್ಬರಾಗಿರುವಂತಹ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಕೂಡ ಸಾಧನೆಯನ್ನು ಮಾಡಿರುವಂತಹ ರೆಬೆಲ್ ಸ್ಟಾರ್ ಅಂಬರೀಶ್(Ambareesh) ಅವರ ಹೆಸರಿನಲ್ಲಿ ಕಟ್ಟಿರುವ ಸ್ಮಾರಕಕ್ಕೆ ಸರಕಾರದ ಹಣವನ್ನು ಪೋಲು ಮಾಡಿರುವುದು ನಿಜಕ್ಕೂ ಕೂಡ ವೇಸ್ಟ್ ಅಂತೆ. ಈ ಸ್ಮಾರಕಕ್ಕೆ 12 ಕೋಟಿ ರೂಪಾಯಿ ವೆಚ್ಚ ಮಾಡಿರುವುದು ನಿಜಕ್ಕೂ ಕೂಡ ಬೇಸರವಾಗುತ್ತಿದೆ ಎಂಬುದಾಗಿ ಚೇತನ್ ಅಹಿಂಸ ಹೇಳಿದ್ದಾರೆ.

ರೆಬಲ್ ಸ್ಟಾರ್ ಅಂಬರೀಶ್ ಅವರು ತಾವು ಬದುಕಿದ್ದಷ್ಟು ದಿನ ಸಮಾಜಕ್ಕಾಗಿ ಏನನ್ನಾದರೂ ನೀಡಿದವರು ಹೊರತು ಸಮಾಜದಿಂದ ಏನನ್ನು ಪಡೆದವರಲ್ಲ ಅವರ ಹೆಂಡತಿಯಾಗಿ ಸುಮಲತಾ ಅಂಬರೀಶ್(Sumalatha Ambareesh) ಅವರು ಅಂಬರೀಶ್ ಅವರ ಸ್ಮಾರಕಕ್ಕಾಗಿ ಸರ್ಕಾರದಿಂದ 12 ಕೋಟಿ ಹಣವನ್ನು ಖರ್ಚು ಮಾಡಿಸಿದ್ದು ನಿಜಕ್ಕೂ ಕೂಡ ವೇಸ್ಟ್ ಎಂಬುದಾಗಿ ಹೇಳಿದ್ದಾರೆ.

ಜನರ ಹಣವನ್ನು ಪೋಲು ಮಾಡಿ ಸ್ಮಾರಕ ಕಟ್ಟಿಸುವ ಬದಲು ಸುಮಲತಾ ಅಂಬರೀಶ್ ಅವರು ತಮ್ಮ ಸ್ವಂತ ದುಡ್ಡಿನಿಂದಲೇ ಸ್ಮಾರಕವನ್ನು ಕಟ್ಟಿಸಬಹುದಿತ್ತು ಎಂಬುದಾಗಿ ಚೇತನ್ ಅಹಿಂಸ ಹೇಳಿಕೆಯನ್ನು ನೀಡಿದ್ದಾರೆ. ಚೇತನ್ ಅಹಿಂಸ(Chethan Ahimsa) ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!