Kranti Movie Promotion time: ಕ್ರಾಂತಿ ಸಿನಿಮಾದ ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ (Challenging Star) ದರ್ಶನ್ ಅವರಿಗೆ ನಡೆದಂತಹ ಚಪ್ಪಲಿ ಎಸೆತದ ಅವಮಾನ ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿರುವಂತಹ ಕಳಂಕ ತರುವಂತಹ ಘಟನೆ ಎಂದರೆ ತಪ್ಪಾಗಲಾರದು.
ಅದು ಯಾರದ್ದೇ ಅಭಿಮಾನಿಗಳು ಮಾಡಿದ್ದರೂ ಕೂಡ ತಪ್ಪು ತಪ್ಪೇ ಅದನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಆದರೆ ಬಳ್ಳಾರಿಯಲ್ಲಿ ನಡೆದಿರುವಂತಹ ಈ ಘಟನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಜ್ ಕುಟುಂಬದ ಅಭಿಮಾನಿಗಳ ನಡುವೆ ದೊಡ್ಡ ಕಂದಕವನ್ನು ಏರ್ಪಡಿಸಿದೆ.
ದರ್ಶನ್ ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರೆ ಈ ಕಡೆ ಸುಖ ಸುಮ್ಮನೆ ನಮ್ಮ ನಟನ ಹೆಸರನ್ನು ಹಾಳು ಮಾಡುವಂತಹ ಪ್ರಯತ್ನವನ್ನು ಮಾಡುತ್ತಿದ್ದೀರಿ ಎಂಬುದಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಕ್ರಾಂತಿ ಸಿನಿಮಾದ ಬಿಡುಗಡೆಯನ್ನೇ(Release) ಮಾಡಲು ಬಿಡುವುದಿಲ್ಲ ಎಂಬುದಾಗಿ ಗುಡುಗುತ್ತಿದ್ದಾರೆ. ಇದು ಅಭಿಮಾನಿಗಳ ನಡುವೆ ಪ್ರಾರಂಭವಾಗಿ ಈಗ ನಟರು ಕೂಡ ಈ ಜಗಳದ ನಡುವೆ ಬರುವಂತಾಗಿದೆ.
ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಚಾರದ ನಿಮಿತ್ತವಾಗಿ ಸಾಕಷ್ಟು ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನವನ್ನು ನೀಡುತ್ತಿದ್ದಾರೆ. ಎಷ್ಟು ಸಮಯ ಮೌನವನ್ನು ವಹಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಪ್ಪಲಿ ಎಸೆದ ಪ್ರಕರಣದ ಕುರಿತಂತೆ ಮೊದಲ ಬಾರಿಗೆ ಪ್ರತಿಕ್ರಿಯೆಯನ್ನು(Response) ನೀಡಿದ್ದಾರೆ. ಚಪ್ಪಲಿ ಎಸೆಯುವಂತಹ ಕೆಲಸವನ್ನು ನಾನೇನು ಮಾಡಿದ್ದೇನೆ ನನಗೆ ಅರ್ಥವಾಗುತ್ತಿಲ್ಲ ಎಂಬುದಾಗಿ ಹೇಳಿದ ಡಿ ಬಾಸ್ ರವರು 25 ವರ್ಷಗಳ ಕಾಲ ಈ ಸಾಮ್ರಾಜ್ಯವನ್ನು ಕಷ್ಟಪಟ್ಟು ಕಟ್ಟಿದ್ದೇನೆ ಎಂಬುದಾಗಿ ಹೇಳುತ್ತಾರೆ.
ಚಿತ್ರರಂಗದಲ್ಲಿ ಭರ್ಜರಿ 25 ವರ್ಷಗಳ ಸಮಯದಿಂದ ನಟಿಸಿಕೊಂಡು ಬಂದಿದ್ದೇನೆ ಇದುವರೆಗೂ ನಾನು ಯಾರಿಗೂ ಮೋಸ ಮಾಡಿಲ್ಲ. ಅಭಿಮಾನಿಗಳ ನಡುವಿನ ಜಗಳದ ಕುರಿತಂತೆ ಮಾತನಾಡುತ್ತಾ ಇದು ಚಪ್ಪಾಳೆ ಇದ್ದ ಹಾಗೆ ಕೇವಲ ಒಂದೇ ಕೈಯಿಂದ ಮಾತ್ರ ಸದ್ದು ಬರುವುದಿಲ್ಲ ಎರಡು ಕಡೆಯಿಂದ ಏನಾದರೂ ಆದಾಗ ಮಾತ್ರ ಇಲ್ಲಿ ಸದ್ದಾಗುತ್ತದೆ ಹೀಗಾಗಿ ಒಬ್ಬರನ್ನೇ ದೂಷಿಸುವುದು ಸರಿಯಲ್ಲ ಎಂಬುದಾಗಿ ಹೇಳಿ ತಮ್ಮ ಖಡಕ್ ಉತ್ತರವನ್ನು ಈ ಕುರಿತಂತೆ ಡಿ ಬಾಸ್ ನೀಡಿದ್ದಾರೆ.
ಇದನ್ನೂ ಓದಿ..ಎಕ್ಸಾಮ್ ನಲ್ಲಿ ಅಪ್ಪು ಮಗಳು ಪಡೆದ ಅಂಕ ಎಷ್ಟು ಗೊತ್ತಾ? ಇಡೀ ಕರುನಾಡೆ ಕಾದಿದ್ದ ವಿಷಯ ಕೊನೆಗೂ ಬಹಿರಂಗ.
ಈ ಪ್ರಕರಣದ ಕುರಿತಂತೆ ಚಾಲೆಂಜಿಂಗ್ ಸ್ಟಾರ್(Challenging Star) ದರ್ಶನ್ ಅವರು ನೀಡಿರುವ ಪ್ರತಿಕ್ರಿಯೆ ಕುರಿತಂತೆ ತಪ್ಪದೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.