Anchor Anushree: ಹೊಯ್ಸಳ ಸಿನಿಮಾದ ವೇದಿಕೆಯ ಮೇಲೆ ಅನುಶ್ರೀ ಅವರಿಗೆ ಹಾಸ್ಯಾಸ್ಪದವಾಗಿ ವಾರ್ನಿಂಗ್ ನೀಡಿದ ಕಿಚ್ಚ!

Kiccha Sudeep ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಡಾಲಿ ಧನಂಜಯ್(Daali Dhananjay) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಗುರುದೇವ ಹೊಯ್ಸಳ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಪ್ರಮುಖ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಟ್ರೈಲರ್ ಲಾಂಚ್ ಮಾಡುವ ಮೂಲಕ ಯುವ ಪ್ರತಿಭೆ ಆಗಿರುವ ಧನಂಜಯ್ ಅವರಿಗೆ ತಮ್ಮ ಬೆಂಬಲವನ್ನು ಕಿಚ್ಚ ಸುದೀಪ್ ವ್ಯಕ್ತಪಡಿಸಿದ್ದಾರೆ.

ಇನ್ನು ಈ ವೇದಿಕೆ ಮೇಲೆ ಸಾಕಷ್ಟು ಸಂಭ್ರಮದ ವಾತಾವರಣ ಕೂಡ ನಿರ್ಮಾಣವಾಗಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಕೂಡ ಪ್ರಮುಖ ಅತಿಥಿಯಾಗಿ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿ ಕಾಣಿಸಿಕೊಂಡಿದ್ದರು. ಇನ್ನು ಈ ಕಾರ್ಯಕ್ರಮದಲ್ಲಿ ನಡೆದಿರುವಂತಹ ಮತ್ತೊಂದು ಘಟನೆ ಕೂಡ ಎಲ್ಲರ ಮುಖದ ಅಂಚಿನಲ್ಲಿ ನಗು ಮೂಡುವಂತೆ ಮಾಡಿದೆ.

ಈ ಸಿನಿಮಾವನ್ನು ಸೇರಿಸಿ ಡಾಲಿ ಧನಂಜಯ್(Dhananjay) ಅವರ ಜೊತೆಗೆ ಸತತವಾಗಿ ಮೂರು ಬಾರಿ ಜೊತೆಯಾಗಿ ನಾಯಕ ನಟಿಯಾಗಿ ನಟಿ ಅಮೃತ ಅಯ್ಯಂಗಾರ್ ಅವರು ನಟಿಸಿರುವ ಕುರಿತಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಇದೇ ವೇದಿಕೆ ಮೇಲೆ ಧನಂಜಯ್ ಅವರ ಕಾಲು ಎಳೆಯುವುದಕ್ಕೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಆಂಕರ್ ಆಗಿದ್ದ ಅನುಶ್ರೀ(Anchor Anushree) ಅವರು ಮಧ್ಯ ಮಾತನಾಡುವುದಕ್ಕೆ ಹೋಗುತ್ತಾರೆ.

ಆಗ ಕಿಚ್ಚ ಸುದೀಪ್(Kiccha) ಹಾಸ್ಯಸ್ಪದವಾಗಿ ವಾರ್ನಿಂಗ್ ನೀಡುತ್ತಾ, ನಾನು ನಿಮ್ಮ ಬಳಿ ಮಾತನಾಡಿದ್ನಾ ಎನ್ನುವುದಾಗಿ ಕೇಳುತ್ತಾರೆ. ಇದು ಕೂಡ ವೇದಿಕೆಯಲ್ಲಿ ನೆರದಿದ್ದ ಎಲ್ಲರ ಮುಖದಲ್ಲಿ ನಗು ಮೂಡುವಂತೆ ಮಾಡುತ್ತದೆ. ಒಟ್ಟಾರೆಯಾಗಿ ಚಿತ್ರರಂಗದ ಹಲವಾರು ಗಣ್ಯರು ಈ ಕಾರ್ಯಕ್ರಮದ ವೇದಿಕೆಯ ಮೇಲೆ ಒಂದೇ ಸೂರಿನ ಅಡಿಯಲ್ಲಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಕೂಡ ಸಂತೋಷವನ್ನು ಮೂಡಿಸಿದೆ.

Leave a Comment

error: Content is protected !!