Puneeth Rajkumar: ಪುನೀತ್ ರಾಜಕುಮಾರ್ ಸಮಾಧಿಯ ಬಳಿ ಹೋಗಿ ಪರಮಾತ್ಮನ ಆಶೀರ್ವಾದ ಪಡೆದ ಪ್ರೇಮ್ ಅವರ ಕುಟುಂಬಸ್ಥರು

ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ನಮ್ಮೆಲ್ಲರಿಂದ ಅಗಲಿ ಎರಡು ವರ್ಷಗಳು ಕಳಿಯುತ್ತಾ ಬಂದಿದೆ. ಆದರೂ ಕೂಡ ಅಪ್ಪು ಇನ್ನಿಲ್ಲ ಎಂಬ ಕಹಿ ನೋವನ್ನು ಯಾರಿಂದಲೂ ಮರೆಯಲು ಸಾಧ್ಯವಾಗುತ್ತಿಲ್ಲ ಇಂದಿಗೂ ಅದೆಷ್ಟೋ ಅಭಿಮಾನಿಗಳು ಅಪ್ಪು ಸಿನಿಮಾ ನಿಮಿತ್ತ ಹೊರದೇಶಕ್ಕೆ ಹೋಗಿದ್ದಾರೆ. ಇನ್ನು ಕೆಲ ದಿನಗಳಲ್ಲಿ ವಾಪಸ್ ಬಂದುಬಿಡುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ.

ಹೀಗೆ ಪುನೀತ್ ರಾಜಕುಮಾರ್(Puneeth Rajkumar) ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳೆಲ್ಲರೂ ಅವರು ಹಾಕಿಕೊಟ್ಟಿರುವಂತಹ ದಾರಿಯಲ್ಲಿ ಸಾಗುತ ಅಪ್ಪು ಮಾಡುತ್ತಿದ್ದಂತಹ ದಾನ ಧರ್ಮಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ನಮ್ಮ ಸ್ಯಾಂಡಲ್ವುಡ್ನ ಸಿನಿ ತಾರೆಯರು ಹಾಗೂ ಅಪ್ಪು ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋ ದೈವದ ಮನೆ ಇದ್ದಂತೆ.

ಅವರ ಮನಸ್ಸಿಗೆ ಬೇಸರವಾದಾಗ ಖುಷಿಯಾದಾಗ ಹಾಗೂ ಯಾವುದಾದರೂ ಸಂತಸದ ವಿಚಾರವನ್ನು ಹಂಚಿಕೊಳ್ಳ ಬಯಸಿದಾಗೆಲ್ಲ ಪುನೀತ್ ರಾಜಕುಮಾರ್(Puneeth Rajkumar) ಅವರ ಸಮಾಧಿಯ ಬಳಿ ಹೋಗಿ ಹೂವನ್ನು ಅರ್ಪಿಸುತ್ತಾ ತಮ್ಮ ಮನದಾಳದಲ್ಲಿರುವಂತಹ ನೋವು ಹಾಗೂ ನಲುವಿನ ವಿಚಾರವನ್ನು ಅಪ್ಪು ಎಂಬ ಪರಮಾತ್ಮನ ಮುಂದೆ ಇಡುತ್ತಾರೆ. ಹೀಗೆ ಹಲವಾರು ಸ್ಟಾರ್ ಸೆಲೆಬ್ರಿಟಿಗಳು

ಆಗಾಗ ಪುನೀತ್ ರಾಜಕುಮಾರ್(Puneeth Rajkumar) ಅವರ ಸಮಾಧಿಯ ಬಳಿ ಭೇಟಿ ನೀಡಿ ಆ ಕೆಲ ಸುಂದರ ಕ್ಷಣಗಳ ಫೋಟೋಗಳನ್ನು ಸೆರೆ ಹಿಡಿದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ನೆನಪಿರಲಿ ಪ್ರೇಮ್(Prem) ಕೂಡ ಹೆಂಡತಿ ಮಕ್ಕಳ ಜೊತೆ ಪುನೀತ್ ರಾಜಕುಮಾರ್ ಅವರ ಸ್ಮಾರಕದ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಭಾರಿ ವೈರಲ್ ಆಗುತ್ತಿದ್ದು,

ತಮ್ಮ ಕುಚಿಕು ಗೆಳೆಯನನ್ನು ಕಾಣಲು ಪ್ರೇಮ್ ತಮ್ಮ ಹೆಂಡತಿ ಜ್ಯೋತಿ ಹಾಗೂ ಇಬ್ಬರು ಮಕ್ಕಳಾದ ಅಮೃತ ಮತ್ತು ಏಕ್ನಾಥ್(Amrutha & Eknath) ಅವರನ್ನು ಜೊತೆ ಕರೆದೊಯ್ದಿರುವುದು ಸಂತಸಕ್ಕೆ ಕಾರಣವಾಗಿದೆ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಅಮೃತ ಪ್ರೇಮವರು ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ತಯಾರಾಗಿರುವ ಟಗರು ಪಲ್ಯ (Tagarupalya) ಸಿನಿಮಾದ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ನಾಯಕ ನಟಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಹೀಗಾಗಿ ಪರಮಾತ್ಮನ ಆಶೀರ್ವಾದ ಪಡೆಯುವ ಸಲುವಾಗಿ ಸ್ಮಾರಕದ ಬಳಿ ತೆರಳಿ ಹೋಗುಚ್ಛ ಹಾಗೂ ತಮ್ಮ ಟಗರು ಪಲ್ಯ ಚಿತ್ರದ ಪೋಸ್ಟರ್ ಒಂದನ್ನು ಇಟ್ಟು ಭಕ್ತಿಯಿಂದ ಪ್ರಾರ್ಥಿಸಿದ್ದಾರೆ, ಹೀಗೆ ಪುನೀತ್ ರಾಜಕುಮಾರ್(Puneeth Rajkumar) ಅವರ ಕೃಪ ಆಶೀರ್ವಾದದಂತೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಪಡೆದುಕೊಳ್ಳುವ ಮೂಲಕ ಭರ್ಜರಿ ಯಶಸ್ಸನ್ನು ಸಾಧಿಸುತ್ತಿದೆ.

Leave a Comment

error: Content is protected !!