ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಾಕಿಂಗ್ ಜೋಡಿಗಳು, ಇಲ್ಲಿವೆ ವೈರಲ್ ಫೋಟೋಸ್

Radhika pandit: ಸ್ನೇಹಿತರೆ, ನಮ್ಮ ಕನ್ನಡ ಸಿನಿಮಾರಂಗದ ಸಾಕಷ್ಟು ಆದರ್ಶ ದಂಪತಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ರಾಧಿಕಾ ಪಂಡಿತ್(Radhika pandit) ಕೂಡ ಒಬ್ಬರು. ಒಟ್ಟಿಗೆ ಸಿನಿ ಬದುಕಿನ ಪಯಣವನ್ನು ಪ್ರಾರಂಭ ಮಾಡಿದಂತಹ ಈ ಜೋಡಿಗಳು ಕಾಲಕ್ರಮೇಣ ನಿಜ ಜೀವನದಲ್ಲಿಯೂ ಒಟ್ಟಾಗಿ ಬಾಳಬೇಕೆಂದು ನಿರ್ಧರಿಸಿ ಹಲವು ವರ್ಷಗಳ ಪ್ರೀತಿಗೆ ಮದುವೆ ಎಂಬ ಮಹತ್ತರವಾದ ಗಂಟನ್ನು ಬೆಸೆದುಕೊಂಡರು.

ಡಿಸೆಂಬರ್ 9, 2016 ರಂದು ಗುರು ಹಿರಿಯರ ಸಮ್ಮುಖದಲ್ಲಿ ಕನ್ನಡ ಚಿತ್ರರಂಗದ ಸಾಕ್ಷಿಯಾಗಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕಿಂಗ್ ಜೋಡಿಗಳಿಗೆ ಇಂದು 7ನೇ ವರ್ಷದ ಮದುವೆ ವಾರ್ಷಿಕೋತ್ಸವದ (Marriage Anniversary) ಸಂಭ್ರಮ. ಹೌದು ಗೆಳೆಯರೇ ಯಶ್ ಹಾಗೂ ರಾಧಿಕಾ ಪಂಡಿತ್ ಅವರು 2005ರಲ್ಲಿ ನಂದಗೋಕುಲ ಎಂಬ ಧಾರಾವಾಹಿಯಲ್ಲಿ ಒಟ್ಟಾಗಿ ಅಭಿನಯಿಸಲು ಪ್ರಾರಂಭ ಮಾಡುತ್ತಾರೆ.

ಹೀಗೆ ಮೂರು ವರ್ಷಗಳ ಕಾಲ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತ ಕಿರುತೆರೆ ವೀಕ್ಷಕರಿಗೆ ಪರಿಚಯರಾಗಿದಂತಹ ಈ ಜೋಡಿಗಳು ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ 2008ರಲ್ಲಿ ಬೆಳ್ಳಿತೆರೆಗು ಪಾದರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲಿಯೇ ಬಹುದೊಡ್ಡ ಮಟ್ಟದ ಯಶಸ್ಸನ್ನು ಕಂಡಂತಹ ಈ ಜೋಡಿಗಳು ತಮ್ಮದೇ ಆದ ವಿಶೇಷ ಸಿನಿ ಜಾನರ್ ನಲ್ಲಿ ಸಕ್ರಿಯರಾದರು. ಹೀಗೆ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್ ನಂತಹ ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸುತ್ತ ತೆರೆಯ ಮೇಲೆ ಸಕ್ಸಸ್ ಕಂಡಂತಹ ಈ ಜೋಡಿಗಳು ನಿಜ ಜೀವನದಲ್ಲಿಯೂ ಒಂದಾಗಬೇಕೆಂದು ನಿರ್ಧರಿಸುತ್ತಾರೆ.

ಹೌದು ಗೆಳೆಯರೇ ರಾಧಿಕಾ ಪಂಡಿತ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವಂತಹ ಸಂದರ್ಭದಲ್ಲಿ ಕೆಜಿಫ್ ಮೂವಿ (KGF Movie) ಅನ್ನು ಮಾಡಿರಲಿಲ್ಲ. ಮಧ್ಯಮ ವರ್ಗದ ಕುಟುಂಬದಿಂದ ಸಿನಿ ಬದುಕನ್ನು ಪ್ರಾರಂಭಿಸಿದಂತಹ ಯಶ್ ಅವರ ಬಳಿ ಕೋಟಿ ಕೋಟಿ ಗಟ್ಟಲೆ ಆಸ್ತಿಯೂ ಇರಲಿಲ್ಲ. ಆದರೆ ರಾಧಿಕಾ ಪಂಡಿತ್ ಅವರು ಹುಟ್ಟಿದಾಗಿನಿಂದಲೂ ಆಗರ್ಭ ಶ್ರೀಮಂತರಾಗಿದ್ದವರು. ಮದುವೆಯ ಸಮಯದಲ್ಲಿ ಯಶ್ ಅವರ ಸಿರಿ ಸಂಪತ್ತನ್ನು ನೋಡದೆ ಕೇವಲ ಪ್ರೀತಿಗೆ ತಲೆಬಾಗಿ ಸಪ್ತಪದಿ ತುಳಿದು ಅವರೊಂದಿಗೆ ದಾಂಪತ್ಯ ಜೀವನವನ್ನು ಪ್ರಾರಂಭ ಮಾಡುತ್ತಾರೆ.

ಹೀಗೆ ಮದುವೆಯಾಗುವ ಮುನ್ನ ಉತ್ತುಂಗದ ಶಿಖರದಲ್ಲಿದಂತಹ ರಾಧಿಕಾ ಪಂಡಿತ್ ತಮ್ಮ ವೈಯಕ್ತಿಕ ಬದುಕಿಗಾಗಿ ಮಹತ್ತರವಾದ ತ್ಯಾಗವನ್ನ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಎಲ್ಲರಿಗೂ ತಿಳಿದಿರುವ ಹಾಗೆ ರಾಧಿಕಾ ಯಶ್ ಅವರನ್ನು ಮದುವೆಯಾದ ನಂತರ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡು ಗಂಡನ ಯಶಸ್ಸನ್ನು ಎದುರು ನೋಡುವಂತಹ ಗ್ರಹಿಣಿಯಾಗಿದ್ದಾರೆ. ಹೀಗೆ ಮಹಾಲಕ್ಷ್ಮಿಯಂತೆ ರಾಧಿಕಾ ಪಂಡಿತ್ ಯಶ್ ಅವರ ಬಾಳಿಗೆ ಕಾಲಿಟ್ಟ ಬಳಿಕ ಅವರ ಅದೃಷ್ಟ ಸಂಪೂರ್ಣ ಬದಲಾಯಿತು.

ಕೇವಲ ರಾಕಿಂಗ್ ಸ್ಟಾರ್ ಆಗಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಈ ಮುದ್ದಾದ ಜೋಡಿಗಳ ಮೇಲೆ ಯಾರ ಕೆಟ್ಟ ದೃಷ್ಟಿಯು ತಾಕದೆ ನೂರು ಕಾಲ ಹೀಗೆ ಸುಖವಾಗಿ ಬಾಳಲಿ ಎಂದು ಹಾರೈಸೋಣ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!