Rishab Shetty: ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ರಿಷಬ್ ಶೆಟ್ಟಿ! ನಿಜವಾದ ಕಾರಣ ಕೇಳಿದರೆ ನೀವು ಕೂಡ ಆಶ್ಚರ್ಯ ಪಡ್ತೀರಾ!

Rishab Shetty ಕಾಂತಾರ ಸಿನಿಮಾದ ಮೂಲಕ ನಟ ರಿಷಬ್ ಶೆಟ್ಟಿ ಅವರು ರಾಷ್ಟ್ರ ವ್ಯಾಪಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಒಂದೊಳ್ಳೆ ಸಿನಿಮಾಗು ಒಂದೊಳ್ಳೆ ಸಂದೇಶವನ್ನು ಕಾಂತಾರ(Kantara) ಸಿನಿಮಾದ ಮೂಲಕ ರಿಶಬ್ ಶೆಟ್ಟಿ, ಜನರಿಗೆ ಹಾಗೂ ಸರ್ಕಾರಕ್ಕೆ ತಲುಪಿಸುವಂತಹ ಕೆಲಸ ಮಾಡಿದ್ದಾರೆ. ಈ ಸಿನಿಮಾಗೆ ರಿಷಬ್ ಶೆಟ್ಟಿ ಅವರು ದಾದಾಸಾಹೇಬ್ ಫಾಲ್ಕೆ(Dadasaheb Phalke Award) ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ.

ಇನ್ನು ಇತ್ತೀಚಿಗಷ್ಟೇ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಭೇಟಿಯಾಗುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಅವರ ಸಂಚಲನ ಸೃಷ್ಟಿಸುವಂತೆ ಮಾಡಿದ್ದಾರೆ. ಇವರಿಬ್ಬರ ಭೇಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಮೊದಲಿಗೆ ರಾಜಕೀಯ ಉದ್ದೇಶ ಎನ್ನುವುದಾಗಿ ಬಿಂಬಿಸಲಾಗಿತ್ತು. ನಂತರ ರಿಷಬ್ ಶೆಟ್ಟಿ(Rishab Shetty) ಅವರೇ ತಾವು ಭೇಟಿಯಾಗಿರುವ ನಿಜವಾದ ಕಾರಣವನ್ನು ತಿಳಿಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Rishab Shetty Meets CM

ಇದರ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಾ ಕಾಂತಾರ ಸಿನಿಮಾದಲ್ಲಿ ಕಾಡಿನ ಜನರ ಕುರಿತಂತೆ ಹಾಗೂ ಅರಣ್ಯ ಅಧಿಕಾರಿಗಳ ಕುರಿತಂತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದೆ. ಅದೇ ರೀತಿ ಅಲ್ಲಿರುವಂತಹ ಸಮಸ್ಯೆಗಳ ಕುರಿದಂತ 20 ಅಂಶಗಳನ್ನು ಪಟ್ಟಿ ಮಾಡಿ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ್ ಬೊಮ್ಮಾಯಿ(CM Bommai) ಅವರಿಗೆ ನೀಡಿದ್ದೇನೆ ಎಂಬುದಾಗಿ ಹೇಳಿದ್ದಾರೆ.

ಅರಣ್ಯದಲ್ಲಿ ವಾಚರ್ ಕೆಲಸಕ್ಕೆ ಉದ್ಯೋಗ ಭರ್ ಸೇರಿದಂತೆ ಇರುವಂತಹ 20 ಸಮಸ್ಯೆಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗಳಿಗೆ ನೀಡಿದ್ದು ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುವಂತಹ ಎಲ್ಲಾ ಸಾಧ್ಯತೆಗಳಿವೆ ಎಂಬುದಾಗಿ ರಿಷಬ್ ಶೆಟ್ಟಿ(Rishab Shetty) ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಜನಪ್ರಿಯ ನಟನಾಗಿ ತನ್ನ ಜವಾಬ್ದಾರಿಗಳನ್ನು ಅರಿತು ರಿಷಬ್ ಶೆಟ್ಟಿ ಅವರು ಕೈಗೊಳ್ಳುತ್ತಿರುವ ಕಾರ್ಯವು ಕೂಡ ನಿಜಕ್ಕೂ ಪ್ರಶಾಂಸಾರ್ಹವಾಗಿದೆ.

Leave a Comment

error: Content is protected !!