Rishab Shetty: ಕಾಂತಾರ 2 ಸ್ಕ್ರಿಪ್ಟ್ ಬರೆಯೋಕೆ ಊರಿಗೆ ಹೋದರೆ ಈಗ ಮಾಡುತ್ತಿರುವುದೇನು ಗೊತ್ತಾ? ನೀವೇ ನೋಡಿ.

Rishab Shetty ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟ ಹಾಗೂ ನಿರ್ದೇಶಕರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವಂತಹ ರಿಷಬ್ ಶೆಟ್ಟಿ(Rishab Shetty) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂತಾರ(Kantara) ಸಿನಿಮಾದ ಯಶಸ್ಸಿನ ನಂತರ ತಮ್ಮ ಬೇಡಿಕೆಯನ್ನು ಹಾಗೂ ಜನಪ್ರಿಯತೆಯನ್ನು ದೇಶದ ಉದ್ದಗಲಕ್ಕೂ ಕೂಡ ಹೆಚ್ಚಿಸಿಕೊಂಡಿದ್ದಾರೆ. ಅವರ ಜನಪ್ರಿಯತೆ ಎನ್ನುವುದು ಭಾಷೆಗಳ ಎಲ್ಲೆಯನ್ನು ಮೀರಿ ಎಲ್ಲಾ ಕಡೆ ಹರಡಿದೆ.

ಸದ್ಯಕ್ಕೆ ರಿಷಬ್ ಶೆಟ್ಟಿ ತಮ್ಮ ಮುಂದಿನ ಸಿನಿಮಾ ಆಗಿರುವ ಕಾಂತಾರ 2(Kantara 2) ಸಿನಿಮಾದ ಕಥೆ ಏನು ತಮ್ಮ ಸ್ವಂತ ಊರಿನಲ್ಲಿ ಬರೆಯುವುದಕ್ಕಾಗಿ ಎಲ್ಲಾ ಜಂಜಾಟಗಳಿಂದ ದೂರವಾಗಿ ಕಾನನದ ನಡುವೆ ಸೇರಿಕೊಂಡಿದ್ದಾರೆ. ಆದರೆ ಈಗ ಕಾಡನ್ನು ಬಿಟ್ಟು ಹೊರಬಂದಿರುವ ರಿಷಬ್ ಶೆಟ್ಟಿ ಹೊರಟಿರುವುದು ಎಲ್ಲಿ ಗೊತ್ತಾ.

ಹೌದು ಮಿತ್ರರೇ ರಿಷಭ್ ಶೆಟ್ಟಿ ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಅನ್ನು ನೋಡಿದರೆ ಲೇಟೆಸ್ಟ್ ಫೋಟೋಗಳಲ್ಲಿ ಅವರು ತಮ್ಮ ಮಡದಿ ಹಾಗೂ ಮಕ್ಕಳ ಜೊತೆಗೆ ಧರ್ಮಸ್ಥಳ(Dharmasthala) ಕುಕ್ಕೆ ಸುಬ್ರಮಣ್ಯ ಸೇರಿದಂತೆ ಹಲವಾರು ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುತ್ತಿರುವುದು ಕಂಡುಬಂದಿದೆ.

ಈ ಸಂದರ್ಭದಲ್ಲಿ ಅವರು ಧರ್ಮಸ್ಥಳದ ಧರ್ಮ ಅಧಿಕಾರಿಯಾಗಿರುವಂತಹ ವೀರೇಂದ್ರ ಹೆಗ್ಗಡೆಯವರ(Veerendra Heggade) ಜೊತೆಗೆ ಇರುವುದು ಕೂಡ ಕಂಡು ಬಂದಿದೆ. ಈ ಫೋಟೋವನ್ನು ನೋಡಿದ ನಂತರ ಅಭಿಮಾನಿಗಳಲ್ಲಿ ಕಾಂತರಾ 2 ಸಿನಿಮಾದ ಬಗ್ಗೆ ಇರುವಂತಹ ನಿರೀಕ್ಷೆಗಳು ಇನ್ನಷ್ಟು ಹೆಚ್ಚಾಗಿವೆ ಎಂದರೆ ತಪ್ಪಾಗಲಾರದು. ರಿಷಬ್ ಶೆಟ್ಟಿ(Rishab Shetty) ಅಭಿಮಾನಿಗಳ ನಿರೀಕ್ಷೆಯನ್ನು ಯಾವ ರೀತಿ ಇನ್ನಷ್ಟು ಪೂರೈಸುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Leave a Comment

error: Content is protected !!