Hoysala: ಹೊಯ್ಸಳ ವೇದಿಕೆಯಲ್ಲೇ ಕಿಚ್ಚ ಸುದೀಪ್ ಮುಂದೆ ಎಲ್ಲರೆದುರು ಬೇಡಿಕೆ ಇಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್!

Kiccha Sudeep ಇತ್ತೀಚಿನ ದಿನಗಳಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಜೊತೆಗೆ ಯುವ ಉದಯೋನ್ಮುಖ ನಟ ನಿರ್ಮಾಪಕ ಆಗಿರುವಂತಹ ಡಾಲಿ ಧನಂಜಯ್(Daali Dhananjay) ಅವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು‌. ಯುವ ನಟರಿಗೆ ಪ್ರೋತ್ಸಾಹ ಮಾಡುವುದರಲ್ಲಿ ಕಿಚ್ಚ ಸುದೀಪ್ ಸದಾ ಕಾಲ ಮುಂದು ಎನ್ನುವುದು ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಇದಕ್ಕಾಗಿಯೇ ಕಿಚ್ಚ ಸುದೀಪ್(Kiccha Sudeep) ಎಲ್ಲರಿಗೂ ಇಷ್ಟ ಆಗೋದು.

ಇನ್ನು ಹೊಂಬಾಳೆ ಫಿಲಂಸ್ ನ(Hombale Films) ಖ್ಯಾತನಾಮರಲ್ಲಿ ಒಬ್ಬರಾಗಿರುವ ಕಾರ್ತಿಕ್ ಗೌಡ ಅವರ ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಗುರುದೇವ್ ಹೊಯ್ಸಳ(Gurudev Hoysala) ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಕಾಣಲಿದ್ದು ಈ ಸಿನಿಮಾದ ಟ್ರೈಲರ್ ಅನ್ನು ನಿನ್ನಷ್ಟೇ ಕಿಚ್ಚ ಸುದೀಪ್(Kiccha Sudeep) ರವರು ಸ್ವತಹ ಖುದ್ದಾಗಿ ಬಂದು ಬಿಡುಗಡೆ ಮಾಡಿದ್ದಾರೆ. ಚಿತ್ರದ ಟ್ರೈಲರ್ ಈಗಾಗಲೇ ಭರವಸೆಯನ್ನು ಮೂಡಿಸಿದ್ದು ಮುಂದಿನ ದಿನಗಳಲ್ಲಿ ಪೊಲೀಸ್ ವಿಭಾಗದಲ್ಲಿ ಮೂಡಿಬಂದಿರುವಂತಹ ಸಿನಿಮಾಗಳಲ್ಲಿ ಇದೊಂದು ವಿಶೇಷ ಸಿನಿಮಾವಾಗಿ ನಿಲ್ಲಲಿದೆ.

ಇನ್ನು ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಬಂದ ಅತಿಥಿಗಳಲ್ಲಿ ನಿರ್ದೇಶಕ ಸಂತೋಷ್ ಆನಂದ ರಾಮ್(Santosh Anand Ram) ಕೂಡ ಒಬ್ಬರಾಗಿದ್ದಾರೆ. ಅವರು ಕೂಡ ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ನಿಂತು ಎಲ್ಲರೂ ಎದುರುಗಡೆನೇ ಕಿಚ್ಚ ಸುದೀಪ್ ಅವರಿಗೆ ಒಂದು ಬೇಡಿಕೆಯನ್ನು ಇಡುತ್ತಾರೆ. ಎಲ್ಲರೂ ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

ಹೌದು ವೇದಿಕೆ ಮೇಲೆ ಬಂದ ಕೂಡಲೇ ಇದೇ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ನವರಸ ನಾಯಕ ಜಗ್ಗೇಶ್(Navarasa Nayaka Jaggesh) ನಾಯಕನಟನಾಗಿ ನಟಿಸಿರುವ ಹಾಗೂ ಸಂತೋಷ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ ರಾಘವೇಂದ್ರ ಸ್ಟೋರ್ಸ್(Raghavendra Stores) ಸಿನಿಮಾಗೂ ಕೂಡ ನಿಮ್ಮ ಬೆಂಬಲ ಇರಬೇಕು ಎಂಬುದಾಗಿ ವೇದಿಕೆ ಮೇಲೆ ನಿಂತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಿಚ್ಚ ಸುದೀಪ್ ರವರನ್ನು ಕೇಳಿದಾಗ ಕೂಡಲೇ ಕಿಚ್ಚ ಸುದೀಪ್(Kiccha Sudeep) ಅವರು ಕೂಡ ನಗುನಗುತ್ತಲೇ ಒಪ್ಪಿಗೆ ನೀಡುತ್ತಾರೆ.

Leave a Comment

error: Content is protected !!