Vishnuvardhan: ವಿಷ್ಣುವರ್ಧನ್ ರವರ ಜೊತೆಗೆ ಮಾಲಾಶ್ರೀ ನಟಿಸದೇ ಇರೋದಕ್ಕೆ ಅಸಲಿ ಕಾರಣ ಇಲ್ಲಿದೆ ನೋಡಿ!

Malashree ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿ ಮಾಲಾಶ್ರೀ(Actress Malashree) ಅವರ ಬೇಡಿಕೆ ನಾಯಕನಟರಿಗಿಂತಲೂ ಹೆಚ್ಚಿತ್ತು. ಅವರ ಜೊತೆಗೆ ಹೊಸ ನಾಯಕನಟರು ಕೂಡ ನಟಿಸಿ ಸಿನಿಮಾ ಯಶಸ್ವಿಯಾದ ನಂತರ ಅವರು ಕೂಡ ಸ್ಟಾರ್ ಪಟ್ಟವನ್ನು ಪಡೆದುಕೊಂಡ ಉದಾಹರಣೆ ಇದೆ. ಆದರೆ ಅವರ ವೃತ್ತಿ ಜೀವನದಲ್ಲಿ ಅವರು ಯಾವತ್ತೂ ಕೂಡ ವಿಷ್ಣುವರ್ಧನ್(Vishnuvardhan) ಅವರ ಜೊತೆಗೆ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ.

ಇದರ ಬಗ್ಗೆ ಚಿತ್ರರಂಗದಲ್ಲಿ ಸಾಕಷ್ಟು ಗಾಳಿ ಸುದ್ದಿಗಳು ಓಡಾಡುತ್ತವೆ ಅವುಗಳಲ್ಲಿ ಪ್ರಮುಖವಾಗಿರುವ ಕಾರಣಗಳನ್ನು ತಿಳಿಯೋಣ ಬನ್ನಿ. ಕೆಲವೊಂದು ಸುದ್ದಿಗಳ ಪ್ರಕಾರ ಹೃದಯ ಅರಳಿತು ಹಾಗೂ ಲಯನ್ ಜಗಪತಿರಾವ್(Lion Jagapathi Rao) ಸಿನಿಮಾ ಒಂದೇ ಸಮಯದಲ್ಲಿ ಬಿಡುಗಡೆಯಾಗಿ ಲಯನ್ ಜಗಪತಿರಾವ್ ಸಿನಿಮಾ ಸ್ವಲ್ಪ ಕಡಿಮೆ ಯಶಸ್ಸನ್ನು ಪಡೆಯಲು ಮಾಲಾಶ್ರೀ ಅವರೆ ಕಾರಣವಾಗಿದ್ದರೂ ಎನ್ನುವುದಾಗಿದೆ. ಇದು ಕೂಡ ಗಾಳಿ ಸುದ್ದಿಯಾಗಿದೆ.

ಇನ್ನು ಮಾಲಾಶ್ರೀ(Malashree) ಅವರ ಇದರ ಕುರಿತಂತೆ ಒಂದು ಹೇಳಿಕೆ ನೀಡಿದ್ದಾರೆ ಎನ್ನುವ ಸುದ್ದಿ ಕೂಡ ಓಡಾಡುತ್ತಿದ್ದು ಅದರಲ್ಲಿ ಅವರು ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ. ಮಾಲಾಶ್ರೀ ಅವರ ಹೇಳುವ ಪ್ರಕಾರ ಅವರಿಗೆ ವಿಷ್ಣುವರ್ಧನ್ ಅವರ ಜೊತೆಗೆ ನಟಿಸಬೇಕು ಎನ್ನುವ ಆಸೆ ಇತ್ತು, ಇಬ್ಬರೂ ಕೂಡ ಸಾಕಷ್ಟು ನಿಕಟ ಬಾಂಧವ್ಯವನ್ನು ಕೂಡ ಹೊಂದಿದ್ದರಂತೆ.

ಇಬ್ಬರೂ ಕೂಡ ಸೂಪರ್ ಸ್ಟಾರ್ ಗಳು ಆಗಿದ್ದ ಕಾರಣದಿಂದಾಗಿ ಕೆಲವು ಒಮ್ಮೆ ಕಥೆ ಹೊಂದಾಣಿಕೆ ಆಗುತ್ತಿರಲಿಲ್ಲ ಹಾಗೂ ಕೆಲವೊಮ್ಮೆ ಡೇಟ್ಸ್ ಗಳು ಹೊಂದಾಣಿಕೆ ಆಗುತ್ತಿರಲಿಲ್ಲ. ಕೆಲವೊಮ್ಮೆ ನಿರ್ಮಾಪಕರು ಇಲ್ಲವೆ ನಿರ್ದೇಶಕರು ಸಿನಿಮಾದಿಂದ ಹಿಂದೆ ಹೋಗುತ್ತಿದ್ದರು ಇದೇ ರೀತಿಯ ಹಲವಾರು ಅಳೆತಡೆಗಳಿಂದಾಗಿ ಮಾಲಾಶ್ರೀ ಹಾಗೂ ವಿಷ್ಣುವರ್ಧನ್(Vishnuvardhan) ರವರು ಒಂದೇ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲವಂತೆ.

Leave a Comment

error: Content is protected !!