Diggajaru: ದಿಗ್ಗಜರು ಸಿನಿಮಾದ ನಂತರ ವಿಷ್ಣು ಜೊತೆ ನಾನು ನಟಿಸುವುದಿಲ್ಲ ಎಂದು ಅಂಬಿ ಹೇಳಿದ್ದು ಯಾಕೆ ಗೊತ್ತಾ?

Vishnu Ambi ಕನ್ನಡ ಚಿತ್ರರಂಗದ ನಟರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರ ಸ್ನೇಹ ಎನ್ನುವುದು ಸದಾಕಾಲ ಉಳಿಯುವಂತೆ ಮಾಡಿರುವಂತಹ ವಿಚಾರವಾಗಿದೆ. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ದಿಗ್ಗಜರು(Diggajaru) ಎನ್ನುವುದಾಗಿ ಕರೆಯಲಾಗುತ್ತದೆ. ಅವರ ಸ್ನೇಹ ಅವರು ಇಂದು ಇಲ್ಲದಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ.

ಇಬ್ಬರೂ ಕೂಡ ಪುಟ್ಟಣ್ಣ ಕಣಗಾಲ್(Puttanna Kanagal) ನಿರ್ದೇಶನದ ನಾಗರಹಾವು ಸಿನಿಮಾದ ಮೂಲಕ ಜೊತೆಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ವಿಷ್ಣುವರ್ಧನ್(Vishnuvardhan) ರವರು ರಾಮಾಚಾರಿಯಾಗಿ ನಾಯಕ ನಟನಾಗಿ ಕಾಲಿಟ್ಟರೆ ಇತ್ತ ಕಡೆ ರೆಬೆಲ್ ಸ್ಟಾರ್ ಅಂಬರೀಶ್ ರವರು ಜಲೀಲ ನಾಗಿ ಖಳನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಇದಾದ ನಂತರ ಇವರಿಬ್ಬರ ನಡುವಿನ ಸ್ನೇಹ ಸಂಬಂಧವು ಕೂಡ ಗಟ್ಟಿಯಾಗುತ್ತದೆ.

ಎಲ್ಲಕ್ಕಿಂತ ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ದಿಗ್ಗಜರು ಸಿನಿಮಾ ಬರುವುದಕ್ಕೂ ಮುನ್ನವೇ ಇವರಿಬ್ಬರು ಹಲವಾರು ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆದರೆ ಅವೆಲ್ಲ ಒಂದು ಕಡೆಯಾದರೆ ದಿಗ್ಗಜರು ಸಿನಿಮಾ(Diggajaru Cinema) ಒಂದು ತೂಕ ಎಂದು ಹೇಳಬಹುದಾಗಿದೆ. ಅಷ್ಟರ ಮಟ್ಟಿಗೆ ಇವರಿಬ್ಬರ ಸಿನಿಮಾ ಜೀವನದಲ್ಲಿ ಹಾಗೂ ಸ್ನೇಹ ಜೀವನದಲ್ಲಿ ದಿಗ್ಗಜರು ಸಿನಿಮಾ ದೊಡ್ಡ ಮಟ್ಟದ ಪ್ರಭಾವವನ್ನು ಬೀರಿದೆ. ಇದಕ್ಕಾಗಿಯೇ ಒಂದು ವೇದಿಕೆಯ ಮೇಲೆ ದಿಗ್ಗಜರು ಸಿನಿಮಾದ ಕುರಿತಂತೆ ಒಂದು ದೊಡ್ಡ ಹೇಳಿಕೆಯನ್ನು ರೆಬೆಲ್ ಸ್ಟಾರ್ ಅಂಬರೀಶ್ ನೀಡಿದ್ದರು.

ಬೇರೆಲ್ಲ ಸಿನಿಮಾಗಳಿಗಿಂತ ದಿಗ್ಗಜರು ಸಿನಿಮಾ ನನ್ನ ಹಾಗೂ ವಿಷ್ಣುವಿನ ಸ್ನೇಹ ಸಂಬಂಧಕ್ಕೆ ಇರುವಂತಹ ಹೆಗ್ಗುರುತಾಗಿದೆ ಎಂಬುದಾಗಿ ಹೇಳಿದ್ದಾರೆ. ಅಷ್ಟರ ಮಟ್ಟಿಗೆ ಇದು ಸ್ಪೆಷಲ್ ಆಗಿದ್ದು ಇದಾದ ನಂತರ ಯಾವ ಸಿನಿಮಾವನ್ನು ಕೂಡ ಒಟ್ಟಿಗೆ ಮಾಡಬೇಕೆಂದು ಅನಿಸುತ್ತಿಲ್ಲ ಈ ಸಿನಿಮಾವೇ ನಮ್ಮ ಸ್ನೇಹಕ್ಕೆ ದೊಡ್ಡ ಗುರುತಾಗಿರಲಿ ಎಂಬುದಾಗಿ ಅಂಬರೀಶ್(Ambareesh) ಹೇಳಿದ್ದರು. ಆಶ್ಚರ್ಯ ಎನ್ನುವಂತೆ ಅದಾದ ನಂತರ ಇಬ್ಬರೂ ಕೂಡ ಯಾವುದೇ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಂದಿಗೂ ವಿಷ್ಣು(Vishnu) ಹಾಗೂ ಅಂಬಿಯ ಸ್ನೇಹವನ್ನು ನೆನೆದಾಗ ಮೊದಲಿಗೆ ಪ್ರತಿಯೊಬ್ಬರಿಗೂ ನೆನಪಾಗುವುದು ದಿಗ್ಗಜರು ಸಿನಿಮಾ.

Leave a Comment

error: Content is protected !!