Darshan: ಡಿ ಬಾಸ್ ದರ್ಶನ್ ಅವರಿಗೆ ಕರುನಾಡ ಅಧಿಪತಿ ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ..

ಸ್ನೇಹಿತರೆ ಕಳೆದ ಡಿಸೆಂಬರ್ 29ನೇ ತಾರೀಕು ರಾಜ್ಯದಾದ್ಯಂತ ಬಿಡುಗಡೆಗೊಂಡಂತಹ ಕಾಟೇರ ಸಿನಿಮಾ(Kateera Cinema) ಅದ್ಭುತ ಯಶಸ್ಸಿನಡಿಗೆ ಸಾಗುತ್ತಿದ್ದು, ಸದ್ಯ ವಿದೇಶದಲ್ಲಿ ಇರುವಂತಹ ಅಭಿಮಾನಿಗಳ ಸಲುವಾಗಿ ಚಿತ್ರವನ್ನು ಪ್ರಪಂಚದ ಮೂಲೆ ಮೂಲೆಯಲ್ಲಿ ಬಿಡುಗಡೆ ಮಾಡುವ ನಿರ್ಧಾರವನ್ನು ಸಿನಿಮಾ ತಂಡ ತೆಗೆದುಕೊಂಡು ದೂರದ ದುಬೈನಲ್ಲಿಯೂ ಚಿತ್ರ ಬಿಡುಗಡೆ ಮಾಡಲಾಯಿತು. ಸಿನಿಮಾ ನೋಡಿ ಆನಂದಿಸಿದಂತಹ ಡಿ ಬಾಸ್ ಅಭಿಮಾನಿಗಳು ದರ್ಶನ್(Darshan) ಮತ್ತು ನಿರ್ದೇಶಕರಾದ ತರುಣ್ ಸುಧೀರ್(Tarun Sudir) ಅವರಿಗೆ ವಿಶೇಷ ಬಿರುದುಗಳನ್ನು ಕೊಟ್ಟು ಗೌರವಿಸಿದ್ದಾರೆ.

ಹೌದು ಗೆಳೆಯರೇ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತಾರನೇ ಸಿನಿಮಾ ಕಾಟೇರ ಇಂದಿಗೆ ಹತ್ತು ದಿನಗಳನ್ನು ಪೂರೈಸಿದ್ದು ಈ 10 ದಿನಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಾ ಭರ್ಜರಿ ಗೆಲುವಿನೆಡಿಕೆ ಸಾಗುತ್ತಿದೆ. ಈಗಾಗಲೇ ಸಿನಿಮಾ ನೂರು ಕೋಟಿ ಅಂತವನ್ನು ತಲುಪಿದೆ ಇಂದಿಗೂ ಚಿತ್ರ ಪ್ರೇಕ್ಷಕರು ಸಿನಿಮಾ ನೋಡಲು ಟಿಕೆಟ್ ಸಿಗದೇ ಪರದಾಡುತ್ತಿರುವುದುಂಟು.

ಕೇವಲ ಕರ್ನಾಟಕ ಮಾತ್ರವಲ್ಲದೆ ಅಮೆರಿಕ, ಆಸ್ಟ್ರೇಲಿಯಾ ಹಾಗೂ ದುಬೈನಂತಹ ಸ್ಥಳಗಳಲ್ಲಿಯೂ ಬಿಡುಗಡೆಗೊಂಡಿರುವಂತಹ ಸಿನಿಮಾವನ್ನು ನೋಡಿದಂತಹ ಕನ್ನಡ ಅಭಿಮಾನಿಗಳು ದಾಸನಿಗೆ ತುಂಬು ಹೃದಯದ ಪ್ರೀತಿ ಗೌರವವನ್ನು ತಿಳಿಸುತ್ತಿದ್ದಾರೆ. ಇನ್ನೊಂದು ದುಬೈ ನಲ್ಲಿ ಇರುವಂತಹ ಅಭಿಮಾನಿಗಳನ್ನು ಭೇಟಿ ಮಾಡಲು ದರ್ಶನ್ ಮತ್ತು ಕಾಟೇರಾ ಸಿನಿಮಾ ತಂಡದವರು ತೆರಳಿದರು. ಆ ಸಮಯದಲ್ಲಿ ಅಭಿಮಾನಿಗಳು ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್(Tarun Sudir)ಗೆ ವಿಶೇಷವಾದ ಬಿರುದನ್ನು ಕೊಟ್ಟಿದ್ದಾರೆ.

ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ಬಾಕ್ಸ್ ಆಫೀಸ್ ಸುಲ್ತಾನ, ಹೀಗೆ ಸಾಕಷ್ಟು ಬಿರುದುಗಳನ್ನು ಸ್ವೀಕರಿಸಿರುವ ದರ್ಶನ್ ಅವರಿಗೆ ಟೀಮ್ ಸುಪ್ರೀಂ ಹಾಗೂ ಕಾಟೇರ ದುಬೈ ಪ್ರೆಸೆಂಟ್ ತಂಡದವರು ಹಾಗೂ ಅಭಿಮಾನಿಗಳು ಸೇರಿ ದರ್ಶನ್ ಅವರಿಗೆ ಕರುನಾಡ ಅಧಿಪತಿ ಎಂಬ ಬಿರುದನ್ನು ಕೊಟ್ಟು ಗೌರವಿಸಿದ್ದಾರೆ. ಅದರ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳು ಬಾರಿ ವೈರಲಾಗುತ್ತಿದ್ಸು,

“ ಚಂದನವನದ ಸ್ಟಾರ್ ನಾಯಕ ನಟ ಚಾಲೆಂಜಿಂಗ್ ಸ್ಟಾರ್ ಶ್ರೀ ದರ್ಶನ್ ತೂಗುದೀಪ್(Darshan Thugudeepa) ರವರ ಪಾದರ್ಪಣಯ ಬೆಳ್ಳಿ ಹಬ್ಬದ ಮಹೋತ್ಸವದ ಈ ಸುಸಂದರ್ಭದಲ್ಲಿ ಅವರ ಅಪ್ರತಿಮ ಕಲಾ ಮತ್ತು ಸಮಾಜ ಸೇವಾ ಸಾಧನೆಗಾಗಿ ಕರುನಾಡ ಅಧಿಪತಿ ಬಿರುದನ್ನು ಪ್ರಧಾನಿಸಲಾಗಿದೆ” ಎಂದು ಬರೆಯಲಾಗಿದೆ. ದರ್ಶನ್(Darshan) ಅವರಿಗೆ ಚೌಕ ತಾರಕ್ ಮತ್ತು ಕಾಟೇರಾದಂತಹ 3 ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ತರುಣ್ ಸುಧೀರ್ ಅವರಿಗೆ ಹ್ಯಾಟ್ರಿಕ್ ಡೈರೆಕ್ಟರ್ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ.

Leave a Comment

error: Content is protected !!